Current Date 31 Jul, 2026

ಜೂ. ಆರ್ಟಿಸ್ಟ್‌ ಬಸ್ ಅಪಘಾತ, ಸೌಲಭ್ಯಗಳ ವಿರುದ್ಧ ಪ್ರತಿಭಟನೆ; ರಿಷಬ್ ಶೆಟ್ಟಿ 'ಕಾಂತಾರ'ಗೆ ವಿಘ್ನಗಳ ಮೇಲೆ ವಿಘ್ನ

Kantara Bus Accident:ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಹಿಟ್ ಆಗುತ್ತಿದ್ದಂತೆ ಪ್ರೀಕ್ಷೆಲ್‌ಗೆ ಕೈ ಹಾಕಿದ್ದರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್‌ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ. ಸಿನಿಮಾ ಆರಂಭಕ್ಕೂ ಮುನ್ನ ರಿಷಬ್ ಶೆಟ್ಟಿ ದೈವದ ಅನುಮತಿಯನ್ನು ಪಡೆದುಕೊಂಡೇ ಸಿನಿಮಾವನ್ನು ಆರಂಭ ಮಾಡಿದ್ದರು. ಆದರೂ ಯಾಕೋ ಸರಿ ಹೋಗುತ್ತಿಲ್ಲವೆಂದು ಅನಿಸುತ್ತಿದೆ.

ಕರಾವಳಿ ಭಾಗದ ಜನರು ನಂಬುವ ಪಂಜುರ್ಲಿ ಹಾಗೂ ಗೂಳಿಗ ದೈವದ ಹಿನ್ನೆಲೆಯನ್ನು ಇಟ್ಟುಕೊಂಡು ಸಿನಿಮಾವನ್ನು ಮಾಡಲಾಗಿತ್ತು. ಅದಕ್ಕೆ ದೈವ ಆಶೀರ್ವಾದ ಕೂಡ ಸಿಕ್ಕಿತ್ತು. ಇದೇ ಖುಷಿಯಲ್ಲಿ ಅದೇ ದೈವದಿಂದ ಅನುಮತಿಯನ್ನು ಪಡೆದು ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1'ಕ್ಕೆ ಕೈ ಹಾಕಿದ್ದರು. ಆದರೆ, ಯಾಕೋ ಸಿನಿಮಾ ತಂಡಕ್ಕೆ ವಿಘ್ನಗಳು ಎದುರಾಗುತ್ತಿವೆ.