Current Date 30 Jul, 2026

ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಧ್ಯಾನ ಕಲಿಸಿದ ಜೈಲ್‌ಮೇಟ್ ಮಾತು


ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ತಿಂಗಳು ಕಳೆದಿದೆ. ನಟ ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ ಎನ್ನುವ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಇನ್ನು ಕುಟುಂಬಸ್ಥರು ಸೇರಿದಂತೆ ಸಾಕಷ್ಟು ಜನ ಆಪ್ತರು ಆಗಾಗ್ಗೆ ಹೋಗಿ ದರ್ಶನ್ ಭೇಟಿ ಮಾಡಿ ಬರುತ್ತಿದ್ದಾರೆ.

 ನಟ ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ? ಅವರು ಯಾವ ಸೆಲ್‌ನಲ್ಲಿ ಇದ್ದಾರೆ? ಅವರಿಗೆ ಏನೆಲ್ಲಾ ಸೌಕರ್ಯಗಳು ಇವೆ ಎನ್ನುವ ಬಗ್ಗೆ ತುವನೂರು ಸಿದ್ದಾರೂಢ ಎಂಬುವವರು ಮಾತನಾಡಿದ್ದಾರೆ. ಪ್ರಕರಣವೊಂದರಲ್ಲಿ ಬರೋಬ್ಬರಿ 22 ವರ್ಷಗಳ ಕಾಲ ಜೈಲಿನಲ್ಲಿದ್ದ ಇವರು ಇತ್ತೀಚೆಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಆಗಿ ಹೊರ ಬಂದಿದ್ದಾರೆ. ದರ್ಶನ್ ಅಭಿಮಾನಿ ಕೂಡ ಆಗಿರುವ ತುರುವನೂರು ಸಿದ್ದಾರೂಢಗೆ ನೆಚ್ಚಿನ ನಟನನ್ನು ಜೈಲಿನಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತಂತೆ. ಆ ಬಗ್ಗೆ ಥರ್ಡ್ ಐ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.