Current Date 31 Jul, 2026

ಅಣ್ಣಾವ್ರ 'ಗಂಧದ ಗುಡಿ' ಹೊಗಳುತ್ತಲೇ ಅಲ್ಲು ಅರ್ಜುನ್‌ಗೆ ತಿವಿದ್ರಾ ಪವನ್ ಕಲ್ಯಾಣ್?

ಮೆಗಾ ಕುಟುಂಬ ಹಾಗೂ ಅಲ್ಲು ಫ್ಯಾಮಿಲಿ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದಕ್ಕೆ ಆಗಾಗ ಸಾಕ್ಷಿ ಸಿಗುತ್ತಲೇ ಇದೆ. ಪವನ್ ಕಲ್ಯಾಣ್ ಚುನಾವಣೆಗೆ ನಿಂತಿದ್ದ ಸಮಯದಲ್ಲಿ ಪವನ್ ಕಲ್ಯಾಣ್ ಎದುರಾಳಿ ಅಭ್ಯರ್ಥಿಯ ಪರ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದರು. ಅಲ್ಲಿಂದ ಎರಡು ಕುಟುಂಬಗಳ ನಡುವಿನ ಸಂಬಂಧ ಮುರಿದು ಬಿದ್ದಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿತ್ತು.