Current Date 01 Aug, 2026

BBK 11: ರಜತ್ ಜೊತೆ ಕಿರಿಕ್, ಬಿಗ್‌ಬಾಸ್ ಮನೆಯಿಂದ ಹೊರಬಂದ್ರಾ ಸುರೇಶ್?

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಿರಿಕ್, ವಾಗ್ವಾದ, ಗಲಾಟೆ ಹೊಸದೇನು ಅಲ್ಲ. ಅದರಲ್ಲೂ ಟಾಸ್ಕ್‌ಗಳ ವೇಳೆ ಮಾರಾಮಾರಿ ನಡೆದಿರುವ ಉದಾಹರಣೆಗಳಿವೆ. ಇನ್ನು ಕಿರಿಕ್ ವೇಳೆ ಅವಾಚ್ಯ ಪದಗಳಿಂದ ನಿಂದಿಸುವಂತಹ ಸನ್ನಿವೇಶಗಳ ಎದುರಾಗುತ್ತವೆ. ಇದು ಮತ್ತಷ್ಟು ತಿಕ್ಕಾಟಕ್ಕೆ ಕಾರಣವಾಗುತ್ತದೆ.

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಕೆಟ್ಟ ಪದಗಳನ್ನು ಬಳಸಿದ ಕಾರಣಕ್ಕೆ ಲಾಯರ್ ಜಗದೀಶ್ ಶಿಕ್ಷೆ ಅನುಭವಿಸಿ ಮನೆಯಿಂದ ಹೊರಬಿದ್ದರು. ಜೊತೆಗೆ ರಂಜಿತ್ ಕೂಡ ಹೊರ ಬರುವಂತಾಗಿತ್ತು. ಹಲ್ಲೆ ಯತ್ನ ಆರೋಪದಡಿ ಅವರಿಗೂ ಶಿಕ್ಷೆ ಎದುರಾಗಿತ್ತು. ಇದೀಗ ಬಿಗ್‌ಬಾಸ್ ಮನೆಗೆ ಮತ್ತಿಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ರಜತ್ ಜೊತೆಗೆ ಶೋಭಾ ಶೆಟ್ಟಿ ಹೊಸದಾಗಿ ಮನೆ ಸೇರಿದ್ದಾರೆ.